Essay on Dara Bendre in Kannada

June 15, 2025

contactmahitideepa@gmail.com

Essay on Dara Bendre in Kannada| ದ .ರಾ ಬೇಂದ್ರೆ ಬಗ್ಗೆ ಪ್ರಬಂಧ

Essay on Dara Bendre in Kannada,dara bendre essay in kannada, ದ.ರಾ. ಬೇಂದ್ರೆ ಬಗ್ಗೆ ಪ್ರಬಂಧ, dara bendre kannada kavi, dara bendre jeevana charitre kannada, dara bendre kannada essay, dara bendre life story in kannada, dara bendre kannada poet essay, dara bendre biography in kannada, dara bendre kavanagalu, dara bendre yochanegalu.

Essay on Dara Bendre in Kannada – ದ. ರಾ. ಬೇಂದ್ರೆ ಬಗ್ಗೆ ಪ್ರಬಂಧ.

ಪೀಠಿಕೆ : ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ನವೋದಯ ಕಾಲದ ಅತ್ಯಂತ ಪ್ರಸಿದ್ಧ ಕನ್ನಡ ಕವಿಗಳಲ್ಲಿ ಒಬ್ಬರು. ವರಕವಿ ಅಕ್ಷರಶಃ ಪ್ರತಿಭಾನ್ವಿತ ಕವಿ ಎಂದು ಹೊಗಳಲ್ಪಟ್ಟ ಅವರು ಕನ್ನಡಕ್ಕಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಜನರಲ್ಲಿ ಎರಡನೇ ವ್ಯಕ್ತಿಯಾಗಿದ್ದಾರೆ. ಇವರು ಉತ್ತಮ ವಿಮರ್ಶಕ ಮತ್ತು ಪ್ರಮುಖ ಕವಿಗಳಲ್ಲೊಬ್ಬರು. ಅವರನ್ನು ಕನ್ನಡದ “ವರಕವಿ” ಎಂದು ಪರಿಗಣಿಸಲಾಗಿದೆ. ಬೇಂದ್ರೆಯವರು “ಅಂಬಿಕಾತನಯದತ್ತ” ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದಾರೆ . ಬೇಂದ್ರೆಯವರು ಕಾವ್ಯ ಪ್ರಪಂಚದಲ್ಲಿ ಹೊಸ ಹಾದಿಯನ್ನು ತೆರೆದವರು. ನಿಸರ್ಗ, ಭಕ್ತಿ, ತಾತ್ವಿಕತೆ ಮತ್ತು ಮಾನವೀಯತೆಯ ಭಾವನೆಗಳು ಅವರ ಸಾಹಿತ್ಯದ ಪ್ರಮುಖ ಅಂಶಗಳಾಗಿವೆ.

Essay on Dara Bendre in Kannada
Essay on Dara Bendre in Kannada

ದ. ರಾ. ಬೇಂದ್ರೆಯವರು ಜನವರಿ 31, 1896ರಂದು ಧಾರವಾಡ ಜಿಲ್ಲೆಯಲ್ಲಿ ಜನಿಸಿದರು. ಅವರು ಶಿಕ್ಷಣವನ್ನು ಧಾರವಾಡ ಮತ್ತು ಪುಣೆಯಲ್ಲಿ ಪಡೆದರು. ಬಾಲ್ಯದಿಂದಲೇ ಸಾಹಿತ್ಯದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಅವರು ತಾಯಿ “ಅಂಬಿಕಾ” ಅವರ ಗೌರವದಲ್ಲಿ “ಅಂಬಿಕಾತನಯದತ್ತ” ಎಂಬ ಹೆಸರನ್ನು ಬಳಸುತ್ತಿದ್ದರು.

ಸಾಹಿತ್ಯಕ್ಕೆ ಬೇಂದ್ರೆಯವರ ಕೊಡುಗೆ ಏನು?

ಬೇಂದ್ರೆಯವರು ನಾನಾ ರೀತಿಯ ಕವನಗಳನ್ನು ರಚಿಸಿದರು. ಪ್ರೇಮ, ಭಕ್ತಿ, ದುಃಖ, ನಿಸರ್ಗ, ತತ್ವಚಿಂತನಾ – ಇವುಗಳ ಮೇಲೆ ಆಧಾರಿತವಾಗಿದ್ದ ಅವರ ಕವನಗಳು ಜನಮನ ಗೆದ್ದುವು.
ಅವರ ಮೊದಲ ಕವನ ಸಂಕಲನ ಪ್ರಕಟವಾಗುವ ಮೊದಲೇ ಸಮಾಜ ಅವರನ್ನು ಕವಿ ಎಂದು ಒಪ್ಪಿಕೊಂಡಿತ್ತು. 1973 ರಲ್ಲಿ ಬೇಂದ್ರೆಯವರು “ನಾಕುತಂತಿ” ಕವನ ಸಂಕಲನಕ್ಕೆ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ “ಜ್ಞಾನಪೀಠ”ವನ್ನು ಪಡೆದುಕೊಂಡರು. ಅವರು ನಾಟಕಗಳು, ಪ್ರಬಂಧಗಳು ಮತ್ತು ವಿಮರ್ಶೆಗಳನ್ನೂ ಬರೆದಿದ್ದಾರೆ.

ಪ್ರಮುಖ ಕೃತಿಗಳು:

ನಾಕು ತಂತಿಯ ಹರಿವು, ಗಂಗಾವತರಣ, ಗರಿ, ಕೃಷ್ಣ ಕುಮಾರಿ, ನಾದಲೀಲೆ, ಅಂಬಿಕಾತನಯದತ್ತ ಕವಿತೆಗಳು, ಸುಖಸಂಗತ, ಮೂರ್ತಿ, ಮಾತಾಡದವನೇ ಗಂಭೀರ.

ಅವರ ಕವಿಗೆ ಸಂದ ಪ್ರಶಸ್ತಿಗಳು ಮತ್ತು ಗೌರವಗಳೇನು.? :

ಜ್ಞಾನಪೀಠ ಪ್ರಶಸ್ತಿ (1973),ರಾಷ್ಟ್ರಕವಿ ಎಂಬ ಗೌರವ,ಪದ್ಮಶ್ರೀ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಅನೇಕ ಗೌರವ ಡಾಕ್ಟರೇಟ್ ಇತ್ಯಾದಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. (1973 ರಲ್ಲಿ ದ.ರಾ. ಬೇಂದ್ರೆ ರವರ “ನಾಕು ತಂತಿ ಕವನ ಸಂಕಲನ ಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿತು.)

ಬೇಂದ್ರೆಯವರ ಶೈಲಿ: ಬೇಂದ್ರೆಯವರ ಕವನ ಶೈಲಿ ಸಂವೇದನಾಶೀಲ, ಭಾವಪೂರ್ಣ ಮತ್ತು ತಾತ್ವಿಕವಾಗಿದೆ. ಕನ್ನಡ ಭಾಷೆಯ ಸೌಂದರ್ಯವನ್ನು ಅವರು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. ಅವರ ಸಾಹಿತ್ಯದಲ್ಲಿ ನಾಡಿನ ಪರಂಪರೆ, ಸಂಸ್ಕೃತಿ ಮತ್ತು ಆಧ್ಯಾತ್ಮವೂ ಇರುವುದರಿಂದ ಎಲ್ಲಾ ಜನಾಂಗದವರಿಗೂ ಅವರ ಕಾವ್ಯ ಮನಸ್ಸಿಗೆ ಹತ್ತುತ್ತದೆ.

ಉಪಸಂಹಾರ:

ದ. ರಾ. ಬೇಂದ್ರೆಯವರು ಕನ್ನಡ ಕಾವ್ಯಲೋಕದಲ್ಲಿ ಎಂದಿಗೂ ಮರೆಯದ ಅಜರಾಮರ ಸ್ಥಾನ ಹೊಂದಿದ್ದಾರೆ. ಅವರ ಕಾವ್ಯಗಳು ಇಂದಿಗೂ ಜನಮನ ಗೆಲ್ಲುತ್ತಿವೆ. 1981ರ ಅಕ್ಟೋಬರ್ ನಲ್ಲಿ ತೀರಿಕೊಂಡ ಅವರು ಈಗಿನ ಯುವ ಪೀಳಿಗೆ, ಯುವ ಕವಿಗಳಿಗೆ, ಸಾಹಿತಿಗಳಿಗೆ ಸ್ಪೂರ್ತಿಯ ಸೆಲೆ. ಯುವ ಪೀಳಿಗೆ ಅವರು ಬರೆದ ಸಾಹಿತ್ಯವನ್ನು ಓದಿ ಕನ್ನಡದ ಹೆಮ್ಮೆ ಮರೆಸಬಾರದು. ಬೇಂದ್ರೆಯವರು ಬರೆದ ಕವನಗಳು ಸದುಪಯೋಗವಾಗಲಿ ಎಂಬುದೇ ನಮ್ಮ ಆಶಯ.

-Mandara


Dara bendre jeevana charitre kannada

ಇದನ್ನು ಓದಿ : Work from home Jobs Kannada : ನಿರೋದ್ಯೋಗಿಗಳಿಗೆ ಆನ್ಲೈನ್‌ ಮೂಲಕ ದುಡಿಮೆ ಮಾಡುವ 5 ಉತ್ತಮ ಮಾರ್ಗಗಳು

FAQ

ದ ರಾ ಬೇಂದ್ರೆ ಅವರ ಜನ್ಮಸ್ಥಳ

ದ. ರಾ. ಬೇಂದ್ರೆಯವರು ಜನವರಿ 31, 1896ರಂದು ಧಾರವಾಡ ಜಿಲ್ಲೆಯಲ್ಲಿ ಜನಿಸಿದರು

ದ ರಾ ಬೇಂದ್ರೆ ಅವರ ಕೃತಿ

‘ನಾಕುತಂತಿ’

Dara bendre information in Kannada ಎಲ್ಲಿ ಸಿಗುತ್ತೆ..?

ಅವರ ಜೀವನದ ಕುರಿತಾದ ಪುಸ್ತಕಗಳಲ್ಲಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ

JOIN

ಇನ್ನು ಹೆಚ್ಚಿನ ಮಾಹಿತಿ ಓದಿ

1 thought on “Essay on Dara Bendre in Kannada| ದ .ರಾ ಬೇಂದ್ರೆ ಬಗ್ಗೆ ಪ್ರಬಂಧ”

  1. ಚೆನ್ನಾಗಿದೆ.. ವರಕವಿ ಬೇಂದ್ರೆಯವರ ಬಗ್ಗೆ ಬರೆದ ನಿಮ್ಮ ಪ್ರಬಂಧ…. ನಿಮ್ಮ ಬರವಣಿಗೆ ಹೀಗೆ ಮುಂದುವರಿಯಲಿ.. ಶುಭವಾಗಲಿ

    Reply

Leave a Comment